ಮಾದರಿ ಪ್ರಶ್ನೋತ್ತರಗಳು!
1) ಕೇಂದ್ರ ಸರ್ಕಾರದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಬಿಡುಗಡೆ ಮಾಡಿರುವ 4ನೇ ರಾಜ್ಯಗಳ ಆಹಾರ ಭದ್ರತಾ ಸೂಚ್ಯಂಕ(4th State Food Safety Index)ದಲ್ಲಿ ಕರ್ನಾಟಕ ಯಾವ ಸ್ಥಾನ ಪಡೆದಿದೆ?
ಎ) 6 ಬಿ) 9
ಸಿ) 12ಡಿ) 15
ಉತ್ತರ: ಬಿ
2)ಇತ್ತೀಚಿಗೆ ಥಾಯ್ಲೆಂಡ್ ಗಲ್ಫ್ನಲ್ಲಿರುವ ರೀಮ್ ನೌಕಾಪಡೆಯ ನೆಲೆಯಲ್ಲಿ ಚೀನಾ 2 ನೇ ವಿದೇಶಿ ಸೇನಾ ನೆಲೆ ನಿರ್ಮಿಸುತ್ತಿದೆ. ಹಾಗಾದರೆ ಮೊದಲ ವಿದೇಶಿ ಸೇನಾ ನೆಲೆಯನ್ನು ಎಲ್ಲಿ ಆರಂಭ ಮಾಡಿತ್ತು?
ಎ) ಜೆಬೂಟಿ (Djibouti - ಪೂರ್ವ ಆಫ್ರಿಕ)
ಬಿ) ಶ್ರೀಲಂಕಾ
ಸಿ) ಮ್ಯಾನ್ಮಾರ್
ಡಿ) ಮೇಲಿನ ಯಾವುದೂ ಅಲ್ಲ
ಉತ್ತರ: ಎ
3) 2021ರಲ್ಲಿ ಭಾರತಕ್ಕೆ ಹರಿದು ಬಂದ ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್ ಡಿ ಐ) ಮೊತ್ತ ಕಡಿಮೆ ಆಗಿದ್ದರೂ ಭಾರತವು ಜಗತಿಕ ಮಟ್ಟದಲ್ಲಿ ಎಫ್ಡಿಐ ಆಕರ್ಷಿಸಿದ ದೇಶಗಳಲ್ಲಿ ಮೊದಲ ಹತ್ತು ಸ್ಥಾನದಲ್ಲಿದೆ. ಹಾಗಾದರೆ ನಿರ್ದಿಷ್ಟವಾಗಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
ಎ) ಮೂರುಬಿ) ನಾಲ್ಕು
ಸಿ) ಏಳುಡಿ) ಒಂಬತ್ತು
ಉತ್ತರ: ಸಿ
4) ಭಾರತದಲ್ಲಿ ಮೊದಲ ಸೋಲಿಗಮಿ/ ಸ್ವಯಂ ವಿವಾಹ ಎಲ್ಲಿ ನಡೆಯಿತು?
ಎ) ವಡೋದರಾ(ಗುಜರಾತ್)
ಬಿ) ಲಖನೌ (ಉತ್ತರ ಪ್ರದೇಶ)
ಸಿ) ಪುಣೆ (ಮಹಾರಾಷ್ಟ್ರ)
ಡಿ) ಮೇಲಿನ ಎಲ್ಲಿಯೂ ಅಲ್ಲ
ಉತ್ತರ: ಎ
5) ಕರ್ನಾಟಕದಲ್ಲಿ ‘ಗಡಿನಾಡಿನ ಚೇತನ’ ಎಂಬ ಪ್ರಶಸ್ತಿಯನ್ನು ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ’ ನೀಡಲು ನಿಶ್ಚಯಿಸಿದೆ. ಯಾರ ಜನ್ಮದಿನಾಚರಣೆ ಸಂದರ್ಭದಲ್ಲಿ ಅವರ ಸ್ಮರಣೆಗಾಗಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ?
ಎ) ಕಯ್ಯಾರ ಕಿಞ್ಞಣ್ಣ ರೈ
ಬಿ) ವಿವೇಕ ರೈ
ಸಿ) ಮಂಜೆ ಮಂಗೇಶ ಪೈ
ಡಿ) ಶಿವರಾಮ ಕಾರಂತ
ಉತ್ತರ: ಎ
6) ಕೆಳಗಿನ ಹೇಳಿಕೆಗಳನ್ನು ಗಮನಿಸಿ
1) ಆದಿ ಶಂಕರಾಚಾರ್ಯರ ಜನ್ಮಸ್ಥಳ ಕಾಲಡಿ ರಾಷ್ಟ್ರೀಯ ಸ್ಮಾರಕವಾಗಲಿದೆ ಎಂದು ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರದ (National Monuments Authority)ಅಧ್ಯಕ್ಷ ತರುಣ ವಿಜಯ್ ತಿಳಿಸಿದ್ದಾರೆ.
2) ಕೇರಳದ ಎರ್ನಾಕುಲಂ ಜಿಲ್ಲೆಯ ಪೆರಿಯಾರ್ ನದಿಯ ದಡದಲ್ಲಿರುವ ಕಾಲಡಿ ಆದಿ ಶಂಕರಾಚಾರ್ಯರ ಜನ್ಮ ಸ್ಥಳ ಎಂದು ಗುರುತಿಸಲಾಗಿದೆ. ಪ್ರಸ್ತುತ ಕಾಲಡಿಯಲ್ಲಿ ಶಾರದಾ ದೇವಿ ಹಾಗೂ ದಕ್ಷಿಣಾಮೂರ್ತಿ
ಉತ್ತರ ಸಂಕೇತಗಳು
ಎ) 1ನೇ ಹೇಳಿಕೆ ಮಾತ್ರ ಸರಿಯಾಗಿ
ಬಿ) 2ನೇ ಹೇಳಿಕೆ ಮಾತ್ರ ಸರಿಯಾಗಿದೆ
ಸಿ) ಯಾವ ಹೇಳಿಕೆಯೂ ಸರಿಯಾಗಿಲ್ಲ
ಡಿ) 1 ಮತ್ತು 2 ಎರಡೂ ಹೇಳಿಕೆಗಳು ಸರಿಯಾಗಿದ್ದಾವೆ
ಉತ್ತರ: ಡಿ
7) ಕೇಂದ್ರ ಆರೋಗ್ಯ ಸಚಿವಾಲಯ 1945ರ ಔಷಧ ಕಾಯ್ದೆಯ ತಿದ್ದುಪಡಿಗೆ ಸೂಚಿಸಿದೆ. ಆ ಪ್ರಕಾರ ಪ್ಯಾರಾಸಿಟಮಾಲ್, ಮೂಗಿನ ಡ್ರಾಪ್ಸ್, ಫಂಗಸ್ ತಡೆಯುವ ಆಂಟಿಬಯೊಟಿಕ್ಸ್ ಸೇರಿದಂತೆ ಎಷ್ಟು ಔಷಧಗಳನ್ನು ವೈದ್ಯರ ಚೀಟಿಯಿಲ್ಲದೇ ಮೆಡಿಕಲ್ ಅಂಗಡಿಯಿಂದ ಪಡೆಯಲು ಇತ್ತೀಚಿಗೆ ಅನುಮತಿ ನೀಡಿದೆ?
ಎ) 20ಬಿ) 16
ಸಿ) 50ಡಿ) 12
ಉತ್ತರ: ಬಿ
8) ಕೆಳಗಿನ ಹೇಳಿಕೆಗಳನ್ನು ಗಮನಿಸಿ
1) ಕೊಲಂಬಿಯಾ ವಿಶ್ವವಿದ್ಯಾಲಯದ ಪರಿಸರ ಕಾನೂನು ಮತ್ತು ನೀತಿ ಅಧ್ಯಯನ ಕೇಂದ್ರ ಮತ್ತು ಭೂವಿಜ್ಞಾನ ಮಾಹಿತಿ ಜಾಲ ಕೇಂದ್ರ ನಡೆಸಿದ ಈ ಸಾಲಿನ ಪರಿಸರ ಕಾರ್ಯ ದಕ್ಷತೆ ಸೂಚ್ಯಂಕದಲ್ಲಿ ಡೆನ್ಮಾರ್ಕ್ ಮೊದಲ ಸ್ಥಾನದಲ್ಲಿದ್ದರೆ ಭಾರತವು ಕೊನೆಯ ಸ್ಥಾನದಲ್ಲಿದೆ.
2) ಪರಿಸರ ಕಾರ್ಯ ದಕ್ಷತೆ ಸೂಚ್ಯಂಕದಲ್ಲಿ ಒಟ್ಟು 180 ದೇಶಗಳನ್ನು ಪರಿಗಣಿಸಿ ಅಧ್ಯಯನ ನಡೆಸಲಾಗಿತ್ತು, ಪ್ರತಿ ದೇಶಗಳ ಸುಸ್ಥಿರ ಅಭಿವೃದ್ದಿ ಮಾದರಿಗಳು, ಹಸಿರುಮನೆ ಅನಿಲ ಹೊರಸೂಸುವಿಕೆ ನಿಯಂತ್ರಣ ಕ್ರಮಗಳನ್ನು ಪರಿಶೀಲಿಸಿ ಸೂಚ್ಯಂಕ ತಯಾರಿಸಲಾಗಿದೆ.
ಉತ್ತರ ಸಂಕೇತಗಳು
ಎ) 1ನೇ ಹೇಳಿಕೆ ಮಾತ್ರ ಸರಿಯಾಗಿದೆ
ಬಿ) 2ನೇ ಹೇಳಿಕೆ ಮಾತ್ರ ಸರಿಯಾಗಿದೆ
ಸಿ) ಯಾವ ಹೇಳಿಕೆಯೂ ಸರಿಯಾಗಿಲ್ಲ
ಡಿ) 1 ಮತ್ತು 2 ಎರಡೂ ಹೇಳಿಕೆಗಳು ಸರಿಯಾಗಿವೆ.
ಉತ್ತರ: ಡಿ
9) 30ಕ್ಕೂ ಹೆಚ್ಚು ಕ್ಷೇತ್ರಗಳನ್ನು ಪ್ರತಿನಿಧಿಸುವ 70ಕ್ಕೂ ಹೆಚ್ಚು ಕಂಪನಿಗಳು ದೇಶದಾದ್ಯಂತ ಹೊಸ ಪ್ರಯೋಗ ನಡೆಸಲು ನಿಶ್ಚಯಿಸಿದ್ದುವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸ ಮಾಡಲು ಅವಕಾಶಕೊಟ್ಟಿವೆ’. ಹಾಗಾದರೆ ಈ ಘಟನೆ ಎಲ್ಲಿ ನಡೆದಿದೆ?
ಎ) ಅಮೆರಿಕಬಿ) ಡೆನ್ಮಾರ್ಕ್
ಸಿ) ಬ್ರಿಟನ್ ಡಿ) ಫ್ರಾನ್ಸ್
ಉತ್ತರ: ಸಿ